ಸ್ನೇಹಿತರೆ,
'ಕನಸು-ಕನವರಿಕೆ'ಯಲ್ಲಿನ ಕೆಲವೊಂದು ಬರಹಗಳಿಗೆ ಓದುಗರು ಹ್ಯಾಗೆ ಸ್ಪಂದಿಸುತ್ತಾರೆ ಮತ್ತು ಅದು ಇನ್ಯಾವುದೋ ಮಜಲಿಗೆ,
ಮತ್ಯಾವುದೋ ಒಂದು ಅರಿವಿಗೆ ತನ್ನನ್ನು ತಾನು ತೆರೆದುಕೊಳ್ಳುತ್ತದೆ ಎಂಬುದಕ್ಕೆ ಕೆಳಗಿನ ಒಂದು ಪ್ರತಿಕ್ರಿಯೆ ಗಮನಿಸಿ.
ನಿಮಗೂ ಖುಷಿಯಾದೀತು.
ಸರ್,
--
regards
AnandaTeertha Pyati
- - - - - - - - - - - - - -
Sr. Reporter, 'Prajavani'
'ಕನಸು-ಕನವರಿಕೆ'ಯಲ್ಲಿನ ಕೆಲವೊಂದು ಬರಹಗಳಿಗೆ ಓದುಗರು ಹ್ಯಾಗೆ ಸ್ಪಂದಿಸುತ್ತಾರೆ ಮತ್ತು ಅದು ಇನ್ಯಾವುದೋ ಮಜಲಿಗೆ,
ಮತ್ಯಾವುದೋ ಒಂದು ಅರಿವಿಗೆ ತನ್ನನ್ನು ತಾನು ತೆರೆದುಕೊಳ್ಳುತ್ತದೆ ಎಂಬುದಕ್ಕೆ ಕೆಳಗಿನ ಒಂದು ಪ್ರತಿಕ್ರಿಯೆ ಗಮನಿಸಿ.
ನಿಮಗೂ ಖುಷಿಯಾದೀತು.
ಸರ್,
'ಕನಸು- ಕನವರಿಕೆ'ಯಲ್ಲಿ ಬರಹ "ಕೊಟ್ಟ ಕುದುರೆ ಏರಲಾಗದವ" ಚೆನ್ನಾಗಿತ್ತು.
ಅದರಲ್ಲಿ ಬರುವ 'ಯಾವ ರಾಜನೂ ಪ್ರಜೆಗಳಿಗೆ ಸಂಡಾಸ್ ಮನೆ' ಕಟ್ಟಿಸಲಿಲ್ಲವೇ? ಎಂಬ ಪ್ರಶ್ನೆ ಕುತೂಹಕಲಕರ. ಈಚೆಗೆ ಕನ್ಯಾಕುಮಾರಿ ಪ್ರವಾಸಕ್ಕೆ ಹೋಗಿದ್ದಾಗ, ಮಾರ್ಗ ಮಧ್ಯೆ ಪದ್ಮನಾಭಪುರಂ ಅರಮನೆ ನೋಡಿದೆ. ಅದರಲ್ಲಿ ರಾಜಕುಟುಂಬದ ಸದಸ್ಯರಿಗೆಂದೇ ಶೌಚಾಲಯ ಕಟ್ಟಲಾಗಿದೆ; ಮತ್ತು ಅದು ಈಗಿನ ಶೈಲಿಯಲ್ಲೇ ಇದೆ!
ನಮ್ಮೂರಿನ (ಕೊಪ್ಪಳ) ಸಮೀಪ ಬಹದ್ದೂರ್ ಬಂಡಿ ಎಂಬ ಗ್ರಾಮದ ಹೊರಗೆ ಕೋಟೆಯಿದೆ. ಅಲ್ಲಿ ಸಹ ಕೋಟೆ ಗೋಡೆಯೊಳಗೆ ಶೌಚಾಲಯಗಳಿವೆ. ಪ್ರಾಯಶಃ ಈ ಬಗ್ಗೆ ಸಂಶೋಧಕರು ಇನ್ನಷ್ಟು ಗಮನ ಹರಿಸಬೇಕು ಎಂಬುದು ನನ್ನ ಅನಿಸಿಕೆ.
ಅಂದ ಹಾಗೆ, ನುಣುಪಾದ ಕಲ್ಲಿನಿಂದ ಕಟ್ಟಿದ ಶೌಚಾಲಯದ ಫೋಟೋ ಕಳಿಸುತ್ತಿದ್ದೇನೆ ನೋಡಿ; ಇದು 300 ವರ್ಷಗಳ ಹಿಂದೆಯೇ ಕಟ್ಟಿದ್ದಂತೆ (ಪದ್ಮನಾಭಪುರಂ ಅರಮನೆಯಲ್ಲಿರುವುದು)...!
ವಂದನೆಗಳು
regards
AnandaTeertha Pyati
- - - - - - - - - - - - - -
Sr. Reporter, 'Prajavani'
ಶೀಯುತ ಆನಂದತೀರ್ಥರೇ,
ನಿಮ್ಮ ಪ್ರತಿಕ್ರಿಯೆ ನೋಡಿ ತುಂಬ ಖುಷಿಯೆನಿಸಿತು.ನನಗನಿಸಿದಂತೆ ಒಂದು ಪ್ರಬಂಧಕ್ಕೆ ಸಂಬಂಧಿಸಿದಂತೆ
ನೀವು ಕೊಟ್ಟಿರುವ ಉತ್ತರ ಮತ್ತು ಅಭಿಪ್ರಾಯ ನೋಡಿ ಮನಸ್ಸು ತುಂಬಿದೆ.ಮತ್ತೇ,ನಿಮ್ಮ ಈ ಪತ್ರ ಕುತೂಹಲಕರ
ಎನಿಸಿದ್ದರಿಂದ ಮತ್ತು ಇಂಥದೊಂದು ವಿಷಯ ಎಲ್ಲರಿಗೂ ಗೊತ್ತಾಗಬೇಕೆಂಬ ಆಸೆಯಿಂದ ನಿಮ್ಮ ಇಡೀ ಪತ್ರದ
ಸಾರಾಂಶವನ್ನು ಬ್ಲಾಗಿನ ಅನಿಸಿಕೆಗಳಲ್ಲಿ ನಿಮ್ಮ ಪರವಾಗಿ ಹಾಕಬೇಕೆಂದಿದ್ದೇನೆ.ನಿಮ್ಮ ಅನುಮತಿಯಿಲ್ಲದೇ
ತೆಗೆದುಕೊಂಡಿರುವ ನನ್ನ ಉತ್ಸಾಹಕ್ಕೆ ನಿಮ್ಮ ಕ್ಷಮೆ ಇರಲಿ.. :-)
ಅನಂತ ಪ್ರೀತಿಯೊಂದಿಗೆ,
-RJ